ಬೆಂಗಳೂರು ಬಂಟರ ಸಂಘದಲ್ಲಿ ಪ್ರೋ.ಎಸ್.ವಿ.ಉದಯಕುಮಾರ ಶೆಟ್ಟರಿಗೆ ಸನ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಜುಲೈ 16 , 2015
|
ಜುಲೈ 16, 2015
|
ಬೆಂಗಳೂರು ಬಂಟರ ಸಂಘದಲ್ಲಿ ಪ್ರೋ.ಎಸ್.ವಿ.ಉದಯಕುಮಾರ ಶೆಟ್ಟರಿಗೆ ಸನ್ಮಾನ
ಬೆಂಗಳೂರು :
ಬೆಂಗಳೂರಿನ ಪ್ರತಿಷ್ಟಿತ ಬಂಟರ ಸಂಘದ ವಾರ್ಷಿಕ ಯಕ್ಷ ಸಿಂಚನ ಕಾರ್ಯಕ್ರಮದಲ್ಲಿ ಯಕ್ಷಗಾನದ ಶ್ರೇಷ್ಟ ಚಿಂತಕ,ಕರ್ನಾಟಕ ಸರಕಾರದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕ್ರುತ ಮಣಿಪಾಲ ಎಂ.ಐ.ಟಿ ಕಾಲೇಜಿನ ಪ್ರಾದ್ಯಾಪಕ ಪ್ರೊ.ಎಸ್.ವಿ.ಉದಯಕುಮಾರ ಶೆಟ್ಟರನ್ನು ಅಭಿನಂದಿಸಲಾಯಿತು. ಸಂಘದ ರಾದಾಬಾಯಿ ತಿಮ್ಮಪ್ಪ ಭಂಡಾರಿ ಸಬಾಂಗಣದಲ್ಲಿ ದಿನವಿಡಿ ನೆಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಬೆಂಗಳೂರು ಬಂಟರ ಸಂಘದ ಅದ್ಯಕ್ಷ ಡಾ/ ನರೇಶ ಶೆಟ್ಟಿಯವರು ಉದಯಕುಮಾರ ಶೆಟ್ಟರನ್ನು ಪಲಪುಷ್ಪ-ತಾಂಬೂಲ ಸ್ಮರಣಿಕೆ, ಯಾಲಕ್ಕಿ ಹಾರ ತೊಡಿಸಿ ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಶಾನಾಡಿ ಅಜಿತ ಕುಮಾರ ಹೆಗ್ಡೆ.ಉದಯವಾಣಿ ಪುರವಣಿ ಸಂಪಾದಕ ಜೋಗಿಯವರು ಆಗಮಿಸಿದ್ದರು. ಬಂಟರ ಸಂಘದ ಗೌರವ ಕಾರ್ಯದರ್ಶಿ ಶ್ರೀದರ ಹೆಗ್ಡೆ,ಯಕ್ಷಗಾನ ಸಮಿತಿ ಅದ್ಯಕ್ಷೆ ಕಲಾವತಿ ಶೆಟ್ಟಿ, ಉಪಸ್ಥಿತರಿದ್ದರು. ಶ್ರೀ ದೀಪಕ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಸನ್ಮಾನಕ್ಕೆ ಉತ್ತರಿಸಿದ ಶೆಟ್ಟರು ನಮ್ಮ ಕಾಲದಲ್ಲಿ ಬಂಟರಿಗೆ ಯಕ್ಷಗಾನದ ಬಗ್ಗೆ ಕೀಳರಿಮೆ ಇದ್ದು ಆಟ ನೋಡುವುದೇ ಅಪರಾಧವಾಗುತಿತ್ತು. ಈಗ ಕಾಲ ಬದಲಾಗಿದೆ ಸಮಾಜದ ಗಣ್ಯರು, ವೈದ್ಯರು, ಇಂಜಿನೀಯರ್ಸ್ ಮುಂತಾದ ಉನ್ನತ ಶಿಕ್ಷಣ ಪಡೆದವರು, ಅಲ್ಲದೆ ಮಹಿಳೆಯರು ಸಹ ಇದರಲ್ಲಿ ಬಾಗವಹಿಸುತ್ತಿರುವುದು ನನಗೆ ಸಂತಸ ನೀಡಿದೆ. ಈ ಸನ್ಮಾನವನ್ನು ನನ್ನ ತಂದೆ-ತಾಯಿ ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಅರ್ಪಿಸುವುದಾಗಿ ತಿಳಿಸಿದರು.
ಬೆಳಗ್ಗಿನ ಉದ್ಘಾಟನೆ ಬಳಿಕ ತೆಂಕು ಬಡಗು, ಮಹಿಳಾ ಯಕ್ಷಗಾನ ಮಕ್ಕಳ ಯಕ್ಷಗಾನ ಯಕ್ಷಗಾನ ಚಿಂತನಾಗೋಷ್ಟಿ ಸನ್ಮಾನ ಸಮಾರಂಭದ ಬಳಿಕ ಸಾಲಿಗ್ರಾಮ ಮೇಳದವರ ಯಕ್ಷಗಾನ ನೆರವೇರಿತು.
|
|
|